ಇದು ಕಂಬದ ಬೋಳಿ ಮಲೆ ಮಹದೇಶ್ವರ ಕರ್ನಾಟಕದ ಬಾಗಕ್ಕೆ

ಇದು ಕಂಬದ ಬೋಳಿ ಮಲೆ ಮಹದೇಶ್ವರ ಕರ್ನಾಟಕದ ಬಾಗಕ್ಕೆ ಎತ್ತರ ಪ್ರದೇಶ ಇದು ಬೆಂಗಳೂರಿಂದ ತಾಳುಬೆಟ್ಟಕ್ಕೆ ಬರುವಾಗ ಎತ್ತರದಲ್ಲಿ ಕಾಣಿಸುತ್ತದೆ ಈ ಕಂಬಗಳನ್ನು 60 ವರ್ಷಕ್ಕೊಮ್ಮೆ ಬದಾಲಿಸುತ್ತಾರೆಂದು ಕಂಬದ ಬೋಳಿ ಜನ ಹೇಳುತ್ತಾರೆ ಕಂಬದ ಬದಾಲಾಣೆಯ ಪೂಜೆಸಲ್ಲಿಸಿದವನೊಬ್ಬ ಅತಿಕಹಿರಿಯ ಆದಿನ ತೀರಿಕೊಳ್ಳುತ್ತಾನೆಂದು ತಿಳಿಸುತ್ತಾರೆ ಅದಕ್ಕೆ ದಾಖಲೆಗಳನ್ನು ಇಟ್ಟಿದ್ದಾರೆ

ಇಲ್ಲಿಂದ ಮತ್ತೊಂದು ಮಾರ್ಗಬದಲಿಸಿದರೆ ತಸ್ಪಾರೆ ಹೋಗುತ್ತದೆ ಇಲ್ಲಿ ಮಹದೇಶ್ವರ ತಪಸ್ಸು ಮಾಡಿದ ಜಾಗ ಬಂಗ ಮಾಡಲು ಬಂದ ಶ್ರವಣನನ್ನು ಸಂಹಾರಮಾಡುವ ಮೊದಲು ಇದ್ದು ಹೊಡಿಕೆ ಹಳ್ಳದಲ್ಲಿರುವ ಬೇವನಹಟ್ಟಿ ಕಾಳಮ್ಮತಪಸ್ಸಿಗೆ ತೊಂದರೆ ಕೊಡುತ್ತಿದ್ದರಿಂದ ಅವಳಿಗೆ ಮಹದೇಶ್ವರರ ಕಾಲಿನಿಂದ ಒದ್ದಾಗ ಕಬ್ಬಾಳಿಗೆ ಬಂದು ಮೈಮೇಲೆ ಕೊದಲು ಬಂದು ಮೀಸೆ ಬಂದಿದೆ ಎಂದು ಹೇಳುತ್ತಾರೆ ಕಬ್ಬಾಳಲ್ಲಿ ಕೊಂಡಾವಾಗಬೇಕಾದರೆ ಈ ತಸ್ಪಾರೆಯಿಂದಲೆ ಪೋಜೆಮಾಡಿ ತೀರ್ಥಪ್ರಸಾದಗಳನ್ನು ಪ್ರತಿವರ್ಷ ಶಿವರಾತ್ರಿಯಂದು ತೆಗೆದುಕೊಂಡು ಹೋಗುತ್ತಾರೆಂದು ಹೇಳುತ್ತಾರೆ ಮತ್ತೆ ಇಲ್ಲೆ ವಜ್ರಕಲ್ಲೊಂದಿದೆ ಇದರಲ್ಲಿ ಮಹದೇಶ್ವರರು ಬೇವಿನಹಟ್ಟಿ ಕಾಳಮ್ಮನನ್ನು ಹುಡುಕಿ ಹೊರಟಾಗ ಅವಳು ಕದ್ದುಬಿಡುತ್ತಾಳೆಂದು ಅಬರಣಗಳನ್ನು ಕಲ್ಲಿನ ಬಂಡೆಯಲ್ಲಿಯಲ್ಲಿಟ್ಟು ಹೋಗಿದ್ದಾರೆ ಎಂದು ಇಲ್ಲಿ ಪೊಜೆ ಮಾಡುತ್ತಾರೆ. ಬೇಸಿಗೆಯಲ್ಲಿ ಕಾಳ್ಗಿಚ್ಚಿನ ಬಗ್ಗೆ ಕಂಬದಬೋಳಿ, ಕಕ್ವಾರೆ, ಮನೆ ಮನೆಗೆ ಬೇಟಿಕೊಟ್ಟು ಆರಿವು ಮೊಡಿಸಲಾಯ್ತು🌹🌹

ಇದು ಕಂಬದ ಬೋಳಿ ಮಲೆ ಮಹದೇಶ್ವರ ಬೆಟ್ಟ | S K Umesh (rtd SP Police)